ಶುಕ್ರವಾರ, ಮಾರ್ಚ್ 11, 2011

ಇವು ಕವನಗಳಲ್ಲ ಮನದ ಮಾತುಗಳು

ಅರಿತು ಬಾಳು..

ಕನ್ನಡದ ಕವಲುಗಳು ನೂರು ಮುನ್ನೂರು
ಜನರಾಶಿ ಬಿಟ್ಟು ಬರುತಿದೆ ಹೊರ ರಾಜ್ಯಗಳ ಊರು ಊರು
ವಲಸಿಗನೇ ಮರೆಯದಿರು ಕರುನಾಡ ಹಿರಿಮೆ
...ಮನದಲಿರಲಿ ಕನ್ನಡ ಮಣ್ಣಿನ ಮಹಿಮೆ
ನೀನೆಂದು ಪರೀಕ್ಷಿಸದಿರು ಕನ್ನಡಿಗರ ತಾಳ್ಮೆ
ಕನ್ನಡ ಕಲಿತು ತೋರು ನಿನ್ನ ಜಾಣ್ಮೆ
ಇದನರಿತು ನೀ ಬಾಳಿದರೆ ಮರುಳೆ
ಹಸನಾಗುವುದು ನಿನ್ನ ಬಾಳೇ

------ ತೃಪ್ತಿ ಮನು


ಎಕ್ಕಡ ಎನ್ನಡ ಪರಭಾಷಿಕರ ಬಾಯಿನಲಿ
ಆದರೆ ಇವು ಕನ್ನಡಿಗರ ಕಾಲಿನಲಿ
A for Apple ಗೆ ಸ್ವಂತ ಪದವಿಲ್ಲ ಹಲ ಭಾಷೆಯಲಿ
ಒಂದು ಎರಡು ಅಂಕಿ ಬರೆಯುತ್ತಾರೆ ಆಂಗ್ಲದಲಿ
'ಹ' ತೆಗೆದು 'ಪ' ಹಾಕಿದರೆ ಹುಟ್ಟಿತೆ ಹೊಸ ಭಾಷೆ
ಸರಿಸಾಟಿ ಆದೀತೆ ನಮ್ಮ ಕನ್ನಡಕೆ...

  
 
------ ತೃಪ್ತಿ ಮನು


(ಈ ಕವನ ರಚನೆಯಾಗುವುದಕ್ಕೆ ಮೂಲ ಕಾರಣ ಕೆಲವು ವಾಸ್ತವಿಕ ಅಂಶಗಳು
ಆಂಗ್ಲ ಭಾಷೆಯ ಮೊದಲ ಪದ, ದಿನ ನಿತ್ಯವು ಬಳಸುವ ಹಣ್ಣು " ಸೇಬಿ ಗೆ " ತಮ್ಮ ಭಾಷೆಇಂದಲೇ ಬೇರೆಲ್ಲ ಭಾಷೆಗಳು ಎಂದೆನ್ನುವ ತಮಿಳಿನಲ್ಲಾಗಲಿ ಹೀಗೆ ಹಲವು ಭಾಷೆಗಳಲ್ಲಿ ಇಂಥಹ ದಿನನಿತ್ಯ ಉಪಯೋಗಿಸುವ ಸಾವಿರಾರು ಪದಗಳಿಗೆ ಅರ್ಥ ಅಥವಾ ಸರಿಸಮನಾದ ಪದ ಇಲ್ಲದೆ ಇರುವುದು.
ಭಾಷೆಗೆ ಇನ್ನೊಂದು ಮುಖ್ಯವಾಗಿ ಇರಲೇ ಬೇಕಾದ ಅಂಶವೆಂದರೆ ತನ್ನದೇ ಆದ ಅಂಕಿಗಳನ್ನು(Numbers) ಹೊಂದಿರುವುದು ಆದರೆ ತಮಿಳಿನಲ್ಲಾಗಲಿ ಹೀಗೆ ಹಲವು ಭಾಷೆಗಳಲ್ಲಿ ಇವು ಇಲ್ಲದೆ ಇರುವುದು ಹಾಗು ಅವು ಆಂಗ್ಲ ಅಂಕಿಗಳಿಗೆ ಪರಾವಲಂಬಿ ಆಗಿರುವುದು ಗಮನಾರ್ಹ.. 

  ಇಂಥಹ ವಶಿಷ್ಟ್ಯಥೆಇಂದ  ಕೂಡಿರುವ  ಕನ್ನಡ ಭಾಷೆಯ ಕುಡಿಗಳಾಗಿರುವುದು ನಮ್ಮ ಪೂರ್ವ ಜನ್ಮಾದ ಪುಣ್ಯ )


  ತಮ್ಮ ಮನಸ್ಸಿನಲ್ಲಿರುವ ಕನ್ನಡಪರ ಕಾಳಜಿಯನ್ನು ಕಾವ್ಯಗಳ ಮೂಲಕ ವ್ಯಕ್ತಪಡಿಸಿರುವ ತೃಪ್ತಿಯವರಿಗೆ ತುಂಬು ಹೃದಯದ ಧನ್ಯವಾದಗಳು

1 ಕಾಮೆಂಟ್‌: