ಮಂಗಳವಾರ, ಮಾರ್ಚ್ 8, 2011

ಮಡಿವಾಳ ಕರ್ನಾಟಕವಲ್ಲವೇ??!!

ನನ್ನ ಹೊಸ ಗಾಡಿ ಪೂಜೆಗೆ ಪೂಜಾ ಸಮಗ್ರಿಕೊಳ್ಳಲು ಕಳೆದವಾರ ಮಡಿವಾಳ ಮಾರುಕಟ್ಟೆಯಲ್ಲಿ ಅಡ್ಡಾಡುತಿದ್ದೆ.
ಯಾವುದೇ ವ್ಯಾಪಾರಿಯನ್ನು ಕನ್ನಡದಲ್ಲಿ ಮಾತನಾಡಿಸಿದರೂ, ಬರುತಿದ್ದ ಉತ್ತರ ಮಾತ್ರ ತಮಿಳಿನಲ್ಲಿ.
ಕನ್ನಡಿಗ ವ್ಯಾಪಾರಿಗಳ ಹುಡುಕಾಟದಲ್ಲಿ ಮಾರುಕಟ್ಟೆಯ ಕೊನೆ ತಲುಪಿದೆ, ಪೋಲಿಸ್ ಸ್ಟೇಷನ್ ನ ಹತ್ತಿರ ಒಬ್ಬ ಹೂ ವ್ಯಾಪಾರಿಯೊಬ್ಬ ಕನ್ನಡದಲ್ಲಿ ವ್ಯಾಪಾರ ಮಾಡುತಿದ್ದ. ಅವನು ಆ ಮಾರುಕಟ್ಟೆಯ ಕೊನೆಯ ವ್ಯಾಪಾರೀ.
            ಮಾರುಕಟ್ಟೆಯಲ್ಲಿ ಕನ್ನಡಿಗರ absence ನ  ಬಗ್ಗೆ ಆತನನ್ನು ವಿಚಾರಿಸಿದಾಗ, ಆ ಮಾರುಕಟ್ಟೆ ತಮಿಳರಿಂದ ಪೂರ್ಣವಾಗಿ ಆಕ್ರಮಿತವಾಗಿದ್ದು, ಅಲ್ಲಿನ leaders ಎಲ್ಲರು ತಮಿಳಿನವರೆ ಆಗಿದ್ದು,ಅಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶವಿಲ್ಲ ಮತ್ತು ಅವರ ಹಣಬಲ ತೋಳ್ಬಲದ ಮುಂದೆ ಕನ್ನಡಿಗರದ್ದೇನು ನಡೆಯುವುದಿಲ್ಲವೆಂದು, ತನ್ನ ಬಳಿಗೆ ಬರುತಿದ್ದ ಕೆಲವೇ ಕೆಲವು ಗ್ರಾಹಕರ ಕಡೆ ಗಮನ ಹರಿಸಿದ. ಮತ್ತೊಂದು ಅಂಶ ಅವನು ತಿಳಿಸಿದ್ದೇನೆಂದರೆ ಅಲ್ಲಿಗೆ ಬರುವ ಹೆಚ್ಚಿನ ತರಕಾರಿ, ಹೂವು, ಹಣ್ಣು ತಮಿಳುನಾಡಿನದ್ದಾಗಿದ್ದು , ಕರ್ನಾಟಕದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು.
       ಮಡಿವಾಳ ಪ್ರದೇಶದಲ್ಲಿ ವಲಸೆಬಂದು ನೆಲೆಸಿರುವ ತಮಿಳರ ಅಟ್ಟಹಾಸ  ಮಾರುಕಟ್ಟೆ ಅಲ್ಲದೆ ಟೋಟಲ್ ಮಾಲ್ ನಲ್ಲಿ,ಫೋರಂನಲ್ಲೂ ಮುಂದುವರೆದಿದೆ.ಅಲ್ಲಿನ  ಬಹುತೇಕ ಉದ್ಯೋಗಿಗಳೆಲ್ಲ ತಮಿಳರೇ.
ಇಂಥ ಸಾವಿರಾರು ಕನ್ನಡದ , ಕನ್ನಡಿಗರ ವಿರುದ್ದದ ಧೋರಣೆಗೆ ಕೊನೆಯಾದರು ಎಂದು, ಕನ್ನಡಿಗರ ಉಳಿವಿಗೆ ಶ್ರಮಿಸುವವರಾರು, ಕನ್ನಡದ ಸಾರ್ವಭೌಮತ್ವ ಸ್ಥಾಪಿತವಾಗುವುದು ಯಾವಾಗ.
ಕರ್ನಾಟಕ ಉಳಿಸುವ , ಕನ್ನಡಿಗರ ಹಿತ ರಕ್ಷಣೆಯ ಮಾತನಾಡುವ ಸಂಘಟನೆಗಳೇಕೆ ಮೌನ ವಹಿಸಿವೆ , ಅವು ಜಾಣ ಕುರುಡು ಪ್ರದರ್ಶಿಸುತ್ತಿವೆಯೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ